Breaking News

ರಾಯಣ್ಣ ಬ್ರಿಗೇಡಿನಲ್ಲಿ ಗುರುತಿಸಿಕೊಂಡ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಅವ್ವಣ್ಣ ಮ್ಯಾಕೇರಿ ವಜಾ



ಬೆಂಗಳೂರು :ರಾಜ್ಯ ಬಿಜೆಪಿಯಲ್ಲಿ ಬಿಎಸ್‍ವೈ ಮತ್ತು ಈಶ್ವರಪ್ಪನವರ ಒಳ ಜಗಳ ತಾರಕ್ಕೆ ಏರಿದೆ .ರಾಯಣ್ಣ ಬ್ರಿಗೇಡ್‌ ಚಟುವಟಿಕೆಯಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡ  ಅವ್ವಣ್ಣ ಮ್ಯಾಕೇರಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ
 ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ .

ಕೆಲವು ದಿನಗಳ ಹಿಂದೆ ಈಶ್ವರಪ್ಪ ಅವರ ಆಪ್ತ ವಲಯದಲ್ಲಿ ಮತ್ತು ರಾಯಣ್ಣ ಬ್ರಿಗೇಡ್‌ ನಲ್ಲಿ  ಗುರುತಿಸಿಕೊಂಡ ಮಾಜಿ ಮೇಯರ್  ಡಿ.ವೆಂಕಟೇಶ್ ಮೂರ್ತಿ ಅವರನ್ನು ಮಂಗಳವಾರ ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು. ಇದೀಗ ಅವ್ವಣ್ಣ ಮ್ಯಾಕೇರಿ ವಜಾದಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಎರಡನೇ ವಿಕೆಟ್ ಪತನವಾಗಿದೆ ರಾಯಣ್ಣ ಬ್ರಿಗೇಡ್ ಸಂಘಟನೆ ಮಾಡಿ ಯಡ್ಡಿಯೂರೊಪ್ಪ ಕೆಂಗಣ್ಣಿಗೆ ಗುರಿಯಾದ ಈಶ್ವರಪ್ಪನವರಿಗೆ ಈ ಮೂಲಕ  ಎಚ್ಚರಿಕೆಯ ಸಂದೇಶ ರವಾನಿಸುವುದು ಯಡಿಯೂರಪ್ಪ ಉದ್ದೇಶ ಎನ್ನಲಾಗಿದೆ.

loading...

No comments