Breaking News

ಬನ್ಸಾಲಿಗೆ ಚಪ್ಪಲಿ ಎಸೆದವರಿಗೆ ಬಿಜೆಪಿ ಎಂಪಿ ಬಹುಮಾನ ?

ಮುಂಬೈ : “ಇತಿಹಾಸ ತಿರುಚಿರುವ” ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಚಪ್ಪಲಿ ಎಸೆದರೆ 10,000 ರೂ ಬಹುಮಾನ ನೀಡಲಾಗುವುದೆಂದು ಮಧ್ಯಪ್ರದೇಶದ ಬಿಜೆಪಿ ನಾಯಕ ಅಖಿಲೇಶ್ ಖಾಂಡೇಲ್ವಾಲ ಪ್ರಕಟಣೆ ತೀವ್ರ ವಿವಾದಕ್ಕೆಡೆ ಮಾಡಿದೆ.

ಇನ್ನಷ್ಟೇ ಬಿಡುಗಡೆಗೊಳ್ಳಬೇಕಿರುವ  ಬನ್ಸಾಲಿ ನಿರ್ದೇಶಕರಾಗಿರುವ ಚಿತ್ರದಲ್ಲಿ ಪದ್ಮಾವತಿ ಮತ್ತು ಮುಸ್ಲಿಂ ದೊರೆ ಅಲಾವುದ್ದೀನ್ ಖಿಲ್ಜಿಯೊಂದಿಗೆ ಅನಗತ್ಯವಾಗಿ ರೋಮ್ಯಾಂಟಿಕ್ ಕನಸುಗಳ ದೃಶ್ಯಗಳನ್ನು ಪೋಣಿಸಲಾಗಿದೆ ಎಂದು ವಿಭಿನ್ನ ರಜಪೂತ ಸಂಘಟನೆಗಳು ಆರೋಪಿಸಿವೆ.
loading...

No comments