Breaking News

ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ವಿಕೃತಿ ಮೆರೆದ ದುಷ್ಟರು



ಬೆಂಗಳೂರು: ನಂದಿನಿ ಲೇಔಟ್ ನಲ್ಲಿ ಯುವತಿಯೊಬ್ಬಳನ್ನು ಅಪಹರಿಸಿ ಆಕೆಯ ಮೇಲೆ ಮೃಗೀಯ ಕೃತ್ಯ ಎಸಗಿರುವ ಘಟನೆ ನಗರದಲ್ಲಿ ತಡವಾಗಿ ವರದಿ ಆಗಿದೆ .ಕೃತ್ಯದಲ್ಲಿ ಮೂವರು ಮಹಿಳೆಯರು ಭಾಗಿಯಾಗಿದ್ದು ಒಟ್ಟು ಐದು ಜನರ ತಂಡ ಆಕೆಯನ್ನು ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಮೃಗೀಯವಾಗಿ ಹಿಂಸಿಸಿ ಪರಾರಿಯಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ನಂದಿನಿ ಲೇಔಟ್ ಠಾಣೆ ಪೊಲೀಸರು ಆರೋಪಿಗಳಾದ ರುಬೀನ್ ತಾಜ್, ಯಾಸ್ಮಿನ್, ಇಂದಿರಾ, ಜಬೀರ್, ಇಮ್ರಾನ್ ಎಂಬುವರನ್ನು ಬಂಧಿಸಿದ್ದಾರೆ.

ಘಟನೆ ವಿವರ:

ಅಪ್ರಾಪ್ತೆಯೊಬ್ಬಳು ಜ.15ರಂದು ಕಾಣೆಯಾಗಿದ್ದಾಳೆ. ಆಕೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಅರಿತಿದ್ದ ಮನೆಯವರು ಆತನೊಂದಿಗೆ ಹೋಗಿರಬಹುದು ಎಂದು ಊಹಿಸಿದ್ದಾರೆ.
ಅಪ್ರಾಪ್ತೆ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಯುವಕ ಅಪಹರಿಸಿರಬಹುದು ಎಂದು ದೂರಿನಲ್ಲಿ ಶಂಕಿಸಿದ್ದಾರೆ.  ಕಾಣೆಯಾಗಿರುವ ಅಪ್ರಾಪ್ತೆ ಪ್ರೀತಿಸುತ್ತಿದ್ದ ಯುವಕ ಸಂತ್ರಸ್ತ ತಾಯಿ-ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದ ಎನ್ನಲಾಗಿದೆ.  ಜ.15ರಂದು ಅಪ್ರಾಪ್ತೆ ಕಾಣೆಯಾಗಿದ್ದು, ಪ್ರಿಯಕರನೊಂದಿಗೆ ಹೋಗಿದ್ದಾಳೆ ಎಂದು ಭಾವಿಸಿದ ಮನೆಯವರು ಯುವಕನಿಗೆ ಆಶ್ರಯ ನೀಡಿದ್ದ ಮಹಿಳೆಯ ಮನೆಗೆ ಜ.17ರಂದು ಬಂದು ಗಲಾಟೆ ಮಾಡಿದ್ದಾರೆ.

ಕಾಣೆಯಾಗಿರುವ ಅಪ್ರಾಪ್ತೆ ಹಾಗೂ ಯುವಕ ಇರುವ ಸ್ಥಳ 19 ವರ್ಷದ ಯುವತಿಗೆ ತಿಳಿದಿರಬೇಕು ಎಂದು ವಿಚಾರಿಸಿದಾಗ ಆತ ಕೆಆರ್ ಪುರಂ ಸಮೀಪದ ಟಿನ್ ಫ್ಯಾಕ್ಟರಿ ಬಳಿ ಇರಬಹುದು ಎಂದು ಅಲ್ಲಿಗೆ ಕರೆದೊಯ್ದಿದ್ದಾಳೆ. ಅಲ್ಲಿ ಯುವಕ ಸಿಕ್ಕಿಲ್ಲ. ಇದರಿಂದ ಕೋಪಗೊಂಡ ಅಪ್ರಾಪ್ತೆ ಕಡೆಯವರು ತಮ್ಮ ಮನೆಗೆ ಎಳೆದೊಯ್ದು ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಹಿಂಸಿಸಿದರು ಎಂದು ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ತಾಯಿ-ಮಗಳು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ ಕಾಣೆಯಾಗಿದ್ದ ಯುವಕ ಹಾಗೂ ಅಪ್ರಾಪ್ತೆಯನ್ನು ಪೊಲೀಸರು ಪತ್ತೆಹಚ್ಚಿ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
loading...

No comments