Breaking News

ಬೆಟ್ಟಿಂಗ್ ದಂಧೆ ಬಿಜೆಪಿ ಕಾರ್ಯಕರ್ತ ಅಂಧರ್



ಬೆಂಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಬಿಜೆಪಿ ಯುವ ಮೋರ್ಚಾ ಚಿಕ್ಕಮಗಳೂರು ನಗರ ಘಟಕದ ಅಧ್ಯಕ್ಷ ಕಾಂಚನ್‌ಗೌಡ ಅಲಿಯಾಸ್‌ ರಾಕಿ (28) ಶಾಸಕ ಸಿ.ಟಿ. ರವಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ಜತೆಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಬೆಟ್ಟಿಂಗ್‌ ದಂಧೆಯ ಪ್ರಮುಖ ಸೂತ್ರಧಾರ ಬೆಂಗಳೂರಿನ ರಾಜರಾಜೇಶ್ವರಿ ನಗರದ ವಾಸಿ ಚೇತನ್‌ ಸೇಟ್‌ (34), ಡಿವೈಎಸ್‌ಪಿ ಕಲ್ಲಪ್ಪ ಆತ್ಮಹತ್ಯೆ ಮತ್ತು ತೇಜಸ್‌ ಅಪಹರಣ ಪ್ರಕರಣದಲ್ಲಿ ಸಿಐಡಿ ವಿಚಾರಣೆ ಎದುರಿಸಿದ್ದ ವಿಜಯಪುರ ವಾಸಿ ಶೋಅಪ್‌ ಶಿವು ಅಲಿಯಾಸ್‌ ಶಿವದತ್ತ (43), ಗ್ರೀನ್‌ ಹೋಟೆಲ್‌ ಮಾಲೀಕ ನರಗನಹಳ್ಳಿಯ ಗಿರೀಶ್‌ (36) ಇತರೆ ಬಂಧಿತ ಆರೋಪಿಗಳು.



ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ಕಾಯಿರವಿ, ಪ್ರಶಾಂತ, ಅಭಿ ಮತ್ತು ಹೊಯ್ಸಳ ಎಂಬುವವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಫೆ.5ರಂದು ಪ್ರಕರಣ ದಾಖಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಕಾಯಿರವಿ (40), ಪ್ರಶಾಂತ (34), ಅಭಿಷೇಕ್ ಗೌಡ (28), ವೆಂಕಟೇಶ್ (42), ಅಫ್ಜಲ್ (30), ಮೋಹನ (34) ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

‘ಆರೋಪಿಗಳಿಂದ ಈವರೆಗೆ ₹2.12 ಲಕ್ಷ ನಗದು, 1 ಲ್ಯಾಪ್‌ಟಾಪ್, 1 ಕಾರು, 16 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಡಿ.ಜೆ. ಚೇತನ್‌ ಸೇಟ್‌
ಬೆಂಗಳೂರಿನ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯ ಚಿನ್ನಾಭರಣ ವ್ಯಾಪಾರಿಯ ಮಗ ಚೇತನ್‌ ಸೇಟ್‌ ಅಲಿಯಾಸ್‌ ಸಂತು ಈ ಪ್ರಕರಣದ ಪ್ರಮುಖ ಆರೋಪಿ. ಬೆಂಗಳೂರಿನಲ್ಲಿ ಡಿ.ಜೆ. (ಡಿಸ್ಕೊ ಜಾಕಿ) ಆಗಿದ್ದ ರೆಸಾರ್ಟ್‌, ಕ್ಲಬ್‌, ಪಂಚತಾರ ಹೋಟೆಲ್‌ಗಳಲ್ಲಿ ಹಾಗೂ ಶ್ರೀಮಂತರ ಮದುವೆ ಸಮಾರಂಭಗಳಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ.
Source prajavani

loading...

No comments