Breaking News

ಪಳನಿ ಸ್ವಾಮಿಗೆ ವಿಶ್ವಾಸ ಮತ

ಚೆನ್ನೈ: ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸಮತ ಯಾಚಿಸಿದ ನಂತರ ತಮಿಳುನಾಡು ವಿಧಾನಸಭೆ ಶನಿವಾರ ಭಾರಿ ಕೋಲಾಹಲಕ್ಕೆ ಸಾಕ್ಷಿ ಆಗಿದೆ. ಕಿರುಚಾಟ, ಕೈ ಕೈ ಮಿಲಾಯಿಸಿದ್ದು, ಪೀಠೋಪಕರಣ ಜಖಂಗೊಂಡಿವೆ.

ದಿನದ ಬೆಳವಣಿಗೆ:

1. ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ದಿನ ಚೆನ್ನೈ ನಗರ ಅಕ್ಷರಶಹಃ ಸ್ಥಬ್ತಗೊಂಡಿತ್ತು.


2. ಕಳೆದ 10 ದಿನಗಳಿಂದ ಗೋಲ್ಡನ್‌ ಬೇ ರೆಸಾರ್ಟ್‌ನಲ್ಲಿ ಸೆರೆಯಾಗಿದ್ದ ಎಐಎಡಿಎಂಕೆ ಶಾಸಕರು ಹೊರಬಂದರು.

3. ಭದ್ರತಾ ತಪಾಸಣೆಗಾಗಿ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟ್ಯಾಲಿನ್‌ ಅವರ ವಾಹನವನ್ನು ಪೊಲೀಸರು ತಡೆದಾಗ, ಅರ್ಧ ಕಿ.ಮೀ. ನಡೆದು ಸಚಿವಾಲಯ ತಲುಪಿದರು.

3. ವಿಶ್ವಾಸಮತ ಯಾಚನೆಗಾಗಿ ಎಐಎಡಿಎಂಕೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬೆಳಗ್ಗೆ 9ಕ್ಕೆ ಸಚಿವಾಲಯಕ್ಕೆ ಆಗಮಿಸಿದರು. ಆಗ ನಮ್ಮನ್ನು ಅಸೆಂಬ್ಲಿ ಆವರಣದಿಂದ ದೂರ ಇಡಲಾಗಿದೆ ಎಂದು ಪತ್ರಕರ್ತರು ದೂರಿದರು.

4. ಬೆಳಗ್ಗೆ 11ಕ್ಕೆ ಕಲಾಪ ಆರಂಭಗೊಂಡಾಗ 230 ಶಾಸಕರು ಉಪಸ್ಥಿತರಿದ್ದರು. ಸಿಎಂ ಪಳನಿಸ್ವಾಮಿ ವಿಶ್ವಾಸಮತ ಯಾಚಿಸಿದರು. ಸ್ಪೀಕರ್‌ ಧನಪಾಲ್‌ ಅದನ್ನು ಅಂಗೀಕರಿಸಿದರು. ಎಐಎಡಿಎಂಕೆಯ ಪನ್ನೀರ್‌ ಸ್ವೆಲಂ ಬಣದ ಗೌಪ್ಯ ಮತದಾನದ ಆಗ್ರಹಕ್ಕೆ ಪ್ರತಿಪಕ್ಷಗಳಾದ ಡಿಎಂಕೆ , ಕಾಂಗ್ರೆಸ್‌ ಬೆಂಬಲ ಸೂಚಿಸಿದವು. ನಂತರ ಕಾಂಗ್ರೆಸ್‌, ಡಿಎಂಕೆ ಸಹ ಗೌಪ್ಯ ಮತದಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು.

5. ವಿಶ್ವಾಸಮತ ಯಾಚನೆ ಮತ್ತೊಂದು ದಿನ ನಡೆಸಬೇಕು ಎಂದು ಡಿಎಂಕೆಯ ಸ್ಟ್ಯಾಲಿನ್‌ ಆಗ್ರಹಿಸಿದರು. ' ರಾಜ್ಯಪಾಲರು 15 ದಿನ ಕಾಲಾವಕಾಶ ನೀಡಿದ್ದರೂ, ತರಾತುರಿಯಲ್ಲಿ ವಿಶ್ವಾಸಮತ ಯಾಚಿಸಿರುವುದೇಕೆ ? ಎಂದು ಪ್ರಶ್ನಿಸಿದರು. ಇದಕ್ಕೆ ಪನ್ನೀರ್‌ ಸೆಲ್ವಂ ಕೈ ಎತ್ತಿ ಬೆಂಬಲ ಸೂಚಿಸಿದರು. ಶಾಸಕರಿಗೆ ಮತ್ತಷ್ಟು ದಿನ ಕಾಲಾವಕಾಶ ನೀಡಬೇಕು, ಅಲ್ಲಿವರೆಗೂ ವಿಶ್ವಾಸಮತ ಯಾಚಿಸಬಾರದು ಎಂದು ಪನ್ನೀರ್‌ ಸೆಲ್ವಂ ಆಗ್ರಹಿಸಿದರು.

6. ಗೌಪ್ಯ ಮತದಾನದ ಆಗ್ರಹವನ್ನು ಸ್ಪೀಕರ್‌ ತಿರಸ್ಕರಿಸಿದರು. 11.30ಕ್ಕೆ ವಿಧಾನಸಭೆಯ ಬಾಗಿಲುಗಳನ್ನು ಮುಚ್ಚಲಾಯಿತು. ನಂತರ ದೂರದರ್ಶನದ ನೇರ ಪ್ರಸಾರ ಸ್ಥಗಿತಗೊಂಡಿತು.

7. ನಂತರ ಕೋಲಾಹಲದ ಸುದ್ದಿ ಹೊರಬಂತು. ಗೌಪ್ಯಮತದಾನ ನಡೆಯದೇ, ಮತ ಎಣಿಕೆ ಆರಂಭವಾಗಿದೆ ಎಂದು ಹೇಳಲಾಯಿತು.

8.ರಹಸ್ಯ ಮತದಾನಕ್ಕೆ ಆಗ್ರಹಿಸಿ ಡಿಎಂಕೆ ಸದಸ್ಯರು ಸ್ಪೀಕರ್‌ ಟೇಬಲ್‌ ಪುಡಿ ಮಾಡಿ, ಮೈಕ್‌ ಕಿತ್ತು ಹಾಕಿದರು ಎಂದು ಕೆಲ ಮೂಲಗಳು ತಿಳಿಸಿದವು. ಡಿಎಂಕೆ ಶಾಸಕರು ಸ್ಪೀಕರ್‌ ಖುರ್ಚಿಯಲ್ಲಿ ಕುಳಿತ ನಂತರ ಸ್ಪೀಕರ್ ಸದನದಿಂದ ಹೊರನಡೆದರು. ಆಗ ಒಂದು ಗಂಟೆವರೆಗೆ ಕಲಾಪ ಮುಂದೂಡಲಾಯಿತು.

9. ಒಂದು ಗಂಟೆಗೆ ಮತ್ತೆ ಕಲಾಪ ಸೇರಿದಾಗ, ಡಿಎಂಕೆಯ 89 ಶಾಸಕರ ಪೈಕಿ 88 ಮಂದಿ ಸದನದಲ್ಲಿ ಹಾಜರಿದ್ದರು. ಮತ್ತೆ ಗದ್ದಲದ ನಡುವೆ ಪಳನಿಸ್ವಾಮಿ ಮತ್ತೆ ವಿಶ್ವಾಸಮತ ಯಾಚಿಸಿದರು.

10. ಮಧ್ಯಾಹ್ನ 1.30ಕ್ಕೆ ಮತ್ತೆ ಸದನವನ್ನು 3ಗಂಟೆಗೆ ಮುಂದೂಡಲಾಯಿತು.

11. ಮಧ್ಯಾಹ್ನ 3.20ಕ್ಕೆ ಪ್ರತಿಪಕ್ಷಗಳಿಲ್ಲದೇ ಮತದಾನ ಆರಂಭ.

12. ಪಳನಿ ಸ್ವಾಮಿಗೆ ವಿಶ್ವಾಸ ಮತ. 122 ಮತಗಳ ಅವರ ಪರ ಚಲಾವಣೆ ಆಗಿದೆ.
Vijaya karnataka 
loading...

No comments