ರೇಪಿಸ್ಟ್ಗಳ ಚರ್ಮ ಸುಲಿದು ಮೆಣಸಿನ ಹುಡಿ ಹಚ್ಚಿ: ಉಮಾ ಭಾರತಿ
ಆಗ್ರಾ: ನನ್ನ ಅಧಿಕಾರದ ಅವಧಿಯಲ್ಲಿ ಸಂತ್ರಸ್ತರ ಎದುರೇ ಅತ್ಯಾಚಾರಿಗಳ ಚರ್ಮ ಸುಲಿದು ಶಿಕ್ಷೆ ನೀಡಿದ್ದೇನೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೊಸ ಬಾಂಬ್ ಸಿಡಿಸಿದ್ದಾರೆ.
ಶುಕ್ರವಾರ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಇವರು, 2016ರ ಆಗಸ್ಟ್ನಲ್ಲಿ ಬುಲಂದ್ ಶಹರ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು, ಇಂತಹ ಪ್ರಕಣಗಳು ಮತ್ತೆ ಮರುಕಳಿಸದಂತೆ ಮಾಡಲು ಅತ್ಯಾಚಾರಿಗಳ ಚರ್ಮ ಸುಲಿದು ಮೆಣಸಿನ ಹುಡಿ ಹಚ್ಚಬೇಕು ಎಂದು ಹೇಳಿದ್ದಾರೆ.
'ದೇಶದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ನಾನು ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿದ್ದ( 2003ರಿಂದ 2004) ಸಂದರ್ಭದಲ್ಲಿ ಅತ್ಯಾಚಾರಿಗಳಿಗೆ ಸಂತ್ರಸ್ತರ ಎದುರು ಕಿರುಕುಳ ನೀಡಿ, ಅವರು ಸಂತ್ರಸ್ತರ ಬಳಿ ಕ್ಷಮಾಪಣೆಗಾಗಿ ಅಂಗಲಾಚಿ ಬೇಡಿಕೊಳ್ಳುವವರೆಗೂ ಶಿಕ್ಷಿಸಿ ಎಂದು ಆದೇಶಿಸಿದ್ದೆ’ ಎಂದು ಹೇಳಿದ್ದಾರೆ.
-vijaya karnataka
ಶುಕ್ರವಾರ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಇವರು, 2016ರ ಆಗಸ್ಟ್ನಲ್ಲಿ ಬುಲಂದ್ ಶಹರ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಗಣನೆಗೆ ತೆಗೆದುಕೊಂಡು, ಇಂತಹ ಪ್ರಕಣಗಳು ಮತ್ತೆ ಮರುಕಳಿಸದಂತೆ ಮಾಡಲು ಅತ್ಯಾಚಾರಿಗಳ ಚರ್ಮ ಸುಲಿದು ಮೆಣಸಿನ ಹುಡಿ ಹಚ್ಚಬೇಕು ಎಂದು ಹೇಳಿದ್ದಾರೆ.
'ದೇಶದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ನಾನು ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿದ್ದ( 2003ರಿಂದ 2004) ಸಂದರ್ಭದಲ್ಲಿ ಅತ್ಯಾಚಾರಿಗಳಿಗೆ ಸಂತ್ರಸ್ತರ ಎದುರು ಕಿರುಕುಳ ನೀಡಿ, ಅವರು ಸಂತ್ರಸ್ತರ ಬಳಿ ಕ್ಷಮಾಪಣೆಗಾಗಿ ಅಂಗಲಾಚಿ ಬೇಡಿಕೊಳ್ಳುವವರೆಗೂ ಶಿಕ್ಷಿಸಿ ಎಂದು ಆದೇಶಿಸಿದ್ದೆ’ ಎಂದು ಹೇಳಿದ್ದಾರೆ.
-vijaya karnataka
loading...
No comments