Breaking News

ಭ್ರಷ್ಟ ಅಧಿಕಾರಿಯ ಮನೆಗೆ ಎಸಿಬಿ ದಾಳಿ ನಡೆದಾಗ ಸಿಕ್ಕ ಸೀರೆ ಎಷ್ಟು ಗೊತ್ತೇ


ಒಂದೂವರೆ ಕೋಟಿ ರೂ ಮೌಲ್ಯದ  ಬರೋಬ್ಬರಿ 7 ಸಾವಿರ ಸೀರೆ   ಪತ್ತೆ

ಹುಬ್ಬಳ್ಳಿ: ಇಂದು ಕರ್ನಾಟಕದಲ್ಲಿ ಹಲವು ಕಡೆ ಎಸಿಬಿ ಮಿಂಚಿನ ಮಿಂಚಿನ ಕಾರ್ಯಾಚರಣೆ ನಡೆಸಿ ಹಲವಾರು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ .ಇದರಲ್ಲಿ ಹುಬ್ಬಳ್ಳಿಯಲ್ಲಿ  ವಿಶ್ವೇಶ್ವರ ನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಅವರ ನಿವಾಸ, ಕಚೇರಿ ಹಾಗೂ ಸ್ನೇಹಿತನ ಮನೆ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದರು .

 ದಾಳಿ ವೇಳೆ ಎಸಿಬಿ ಅಧಿಕಾರಿಗಳಿಗೆ  ಕರ್ನಲ್ ಪತ್ನಿಯ ಸೀರೆ ವ್ಯಾಮೋಹ ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದ್ದು, ಬರೋಬ್ಬರಿ ಏಳು ಸಾವಿರ ಸೀರೆಗಳು ಪತ್ತೆಯಾಗಿವೆ.ಕನಿಷ್ಟ ಬೆಲೆಯಿಂದ ಸುಮಾರು 20 ಸಾವಿರ ರೂ. ಮೌಲ್ಯದ ಸೀರೆಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ಒಂದೂವರೆ ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಅಕ್ರಮ ಆಸ್ತಿ ಹಾಗೂ ಆದಾಯಕ್ಕೂ ಮೀರಿ ಸಂಪಾದನೆ ಕುರಿತು  ಹಲವು ಮಹತ್ವದ ದಾಖಲೆ ವಶಪಡಿಸಿ ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ .
loading...

No comments