Breaking News

ಮದ್ಯ ನಿಷೇಧಕ್ಕೆ ಮೇಧಾ ಪಾಟ್ಕರ್ ಆಗ್ರಹ


ಕಲಬುರ್ಗಿ: ಗುಜರಾತ್ ಮತ್ತು ಬಿಹಾರ ಮಾದರಿಯಲ್ಲಿ ಕರ್ನಾಟಕದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ಯ ನಿಷೇಧ ಮಾಡಬೇಕು ಎಂದು ಹೋರಾಟಗಾರ್ತಿ ಮೇಧಾ ಪಾಟ್ಕರ್ ಆಗ್ರಹಿಸಿದರು.

ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಹಿಳಾ ಜನಜಾಗೃತಿ ಆಂದೋಲನ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಸ್ತ್ರೀಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಅಕ್ಕಿ, ಬೇಳೆ ಕೊಡುವುದು ನಿಲ್ಲಿಸಿದರೂ ಪರವಾಗಿಲ್ಲ. ಆದರೆ ಮದ್ಯ ನಿಷೇಧ ಮಾಡಬೇಕು ಎಂದು ಆಳಂದ ತಾಲ್ಲೂಕು ಮಹಿಳೆಯರು ಹೋರಾಟ ಆರಂಭಿಸಿದ್ದಾರೆ. ಇದನ್ನು ಶಾಸಕಾಂಗದ ಬಿ.ಆರ್. ಪಾಟೀಲ ಅವರು ಬೆಂಬಲಿಸಿದ್ದಾರೆ. ಪ್ರತಿ ಗ್ರಾಮದಲ್ಲೂ ಮಹಿಳೆಯರ ಬೇಡಿಕೆ ಇದೊಂದೆ ಆಗಿದೆ ಎಂದರು.
Via prajavani 
loading...

No comments