Breaking News

'ಹೆಬ್ಬುಲಿ' ಚಿತ್ರತಂಡದ ವಿರುದ್ಧ ಗರಂ ಆದ ಕ್ರೇಜಿ ಸ್ಟಾರ್ ಅಭಿಮಾನಿಗಳು.

ಬೆಂಗಳೂರು : ರಾಜ್ಯಾದ್ಯಂತ ಗುರುವಾರ ಬಿಡುಗಡೆ ಕಂಡ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದ್ದರೆ ಕ್ರೇಜಿಸ್ಟಾರ್ ರವಿಶ್ಚಂದ್ರನ್ ಅಭಿಮಾನಿಗಳು 'ಹೆಬ್ಬುಲಿ' ಚಿತ್ರ ತಂಡದ ವಿರುದ್ಧ ಗರಂ ಆಗಿದ್ದಾರೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರ ಮಂದಿರದಲ್ಲಿ 'ಹೆಬ್ಬುಲಿ'ಚಿತ್ರ ಬಿಡುಗಡೆಗೊಂಡಿದ್ದು ಮೊದಲನೇ ಶೋ ನೋಡಬೇಕೆಂದು ಕಾತುರದಿಂದ ಟಿಕೆಟ್ ಖರೀದಿಸಿದ್ದ ರವಿಶ್ಚಂದ್ರನ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. 
ಹೆಬ್ಬುಲಿ ಚಿತ್ರದಲ್ಲಿ ಸುದೀಪ್ ಜೊತೆಯಲ್ಲಿ ರವಿಶ್ಚಂದ್ರನ್ ಕೂಡ ಅಭಿನಯಿಸಿದ್ದಾರೆ. ಇಬ್ಬರು ಜೊತೆಯಾಗಿ ಅಭಿನಯಿಸಿರುವುದರಿಂದ ಚಿತ್ರ ಮಂದಿರದ ಎದುರು ತಮ್ಮ ನೆಚ್ಚಿನ ನಾಯಕ ಕ್ರೇಜಿಸ್ಟಾರ್ ರವಿಶ್ಚಂದ್ರನ್ ಕಟೌಟ್ ಇರಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಮೂಡಿದೆ. ಚಿತ್ರ ಮಂದಿರದ ಎದುರು ಕೇವಲ ಸುದೀಪ್ ಅವರ 60ಅಡಿ ಎತ್ತರದ ಕಟೌಟ್ ಹಾಕಲಾಗಿತ್ತು. ಕನ್ನಡದ ದಿಗ್ಗಜ ನಟರಲ್ಲಿ ಒಬ್ಬರಾಗಿದ್ದರು ರವಿಶ್ಚಂದ್ರನ್ ಕಟೌಟ್ ಹಾಕದೆ ಇರುವುದರಿಂದ ಅಭಿಮಾನಿಗಳು ಗರಂ ಆಗಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಹೆಬ್ಬುಲಿ ನಿರ್ದೇಶಕ ಕೃಷ್ಣ ಅವರಲ್ಲಿ ಕ್ರೇಜಿಸ್ಟಾರ್ ಅಭಿಮಾನಿಗಳು ತಮ್ಮ ಬೇಸರ ವ್ಯಕ್ತ ಪಡಿಸಿದ್ದಾರೆ. ನಿರ್ದೇಶಕ ಕೃಷ್ಣ ರವಿಶ್ಚಂದ್ರನ್ ಅಭಿಮಾನಿಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಈ ಹಿಂದೆ ಮಾಣಿಕ್ಯ ಚಿತ್ರದ ಸಮಯದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು.  ಆವಾಗ ಕಟೌಟ್ ಹಾಕಲಾಗಿತ್ತಾದರೂ ಕೇವಲ ಸುದೀಪ್ ಕಟೌಟ್ ಗೆ ಹೂವಿನ ಹಾರ ಹಾಕಲಾಗಿತ್ತು ಆ ಸಂದರ್ಭದಲ್ಲಿಯೂ ರವಿಶ್ಚಂದ್ರನ್ ಅಭಿಮಾನಿಗಳು ಸುದೀಪ್ ಚಿತ್ರ ತಂಡದ ವಿರುದ್ಧ ಗರಂ ಆಗಿದ್ದರು.
loading...

No comments