Breaking News

ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ ಅಂದರ್!



ಬೆಳಗಾವಿ(ಫೆ.02): ಆ ಆರು ಮಂದಿ ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ನಂಟು ಹೊಂದಿದ್ದರು. ಹಿಂಡಲಗಾ ಜೈಲಿನಲ್ಲಿರುವ ಪಾತಕಿ ದಿನೇಶ ಶೆಟ್ಟಿಯನ್ನ ಬಿಡಿಸಿಕೊಂಡು ಹೋಗಲು ಆ ನಟೋರಿಯಸ್ ಶಾರ್ಪ್‌ ಶೂಟರ್ಸ್ ಬಂದಿದ್ದರು. ಆದರೆ, ಬೆಳಗಾವಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಹೆಡೆಮುರಿ ಕಟ್ಟಿ ಭಾರೀ ಸಂಚೊಂದನ್ನು ವಿಫಲಗೊಳಿಸಿದ್ದಾರೆ.
ನಿನ್ನೆ ಸಂಜೆ ಬೆಳಗಾವಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ವಲ್ಪ ಯಾಮಾರಿದರೆ ಭಾರೀ ರಕ್ತದೋಕುಳಿ ನಡೆದು ಹೋಗುತ್ತಿತ್ತು. ಭಾರೀ ಪ್ರಮಾಣದ ಸ್ಫೋಟಕ ಮತ್ತು ಪಿಸ್ತೂಲ್‌ ಹಿಡಿದಿದ್ದ ಶಾರ್ಪ್‌ ಶೂಟರ್ಸ್‌ ಹಣೆಗೇ ಗನ್​​​ ಟ್ರಿಗರ್ ಒತ್ತಿ ಹಿಡಿದೇ ಪೊಲೀಸರು ವ್ಯವಸ್ಥಿತ ಸಂಚನ್ನ ವಿಫಲಗೊಳಿಸಿದ್ದಾರೆ. ಈ ಆಪರೇಷನ್​ ಸಮಯದಲ್ಲಿ ಯಾವುದೇ ಅಪಾಯ ಆಗದಂತೆ DCP ಅಮರನಾಥ ರೆಡ್ಡಿ, ACP ಜಯಕುಮಾರ ನೇತೃತ್ವದ ಟೀಮ್ ಸಕ್ಸಸ್ ಆಗಿದೆ ಎಂದು ತಿಳಿದು ಬಂದಿದೆ
-suvarnanews

loading...

No comments