Breaking News

ಉಡುಪಿಯಲ್ಲಿ ನಡೆಯಲಿದೆ ರೈತ ಸಮಾವೇಶ


ಉಡುಪಿ : ಜಿಲ್ಲಾ ಕೃಷಿಕ ಸಂಘವು ಕೃಷಿಕರ ಸಮಾವೇಶವನ್ನು ಫೆ 26ರಂದು ಇಲ್ಲಿನ ಶಾರದಾ ಮಂಟಪದಲ್ಲಿ ಏರ್ಪಡಿಸಿದೆ.

ಸಮಾವೇಶದಲ್ಲಿ ವಿವಿಧ ಕೃಷಿ ಸಂಬಂಧಿತ ವಸ್ತುಗಳು ಮತ್ತು ಕೃಷಿ ಯಂತ್ರಗಳ ಪ್ರದರ್ಶನಗಳು ನಡೆಯಲಿವೆ. ಸಮಾವೇಶವನ್ನು ಆಳ್ವಾಸ್ ಶಿಕ್ಷಣ ಟ್ರಸ್ಟಿನ ಅಧ್ಯಕ್ಷ ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ, ನಂತರ ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ ಕಾರಂತ ಪೆರಾಜೆ ಸಮಾವೇಶಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಬಂಟಕಲ್ಲು ಹೇಳಿದ್ದಾರೆ.

ರೈತರಾದ ಪುಣಚಾರು ರಾಮಚಂದ್ರ ಭಟ್, ಕರಂಬಳ್ಳಿ ಕೆ ಮಂಜುನಾಥ ನಾಯಕ್, ವಿಲ್ಫ್ರೆಡ್ ಮೆಂಡೋನ್ಸಾ ಮಣಿಪುರ, ಅಂಜಾರು ಭಾರತಿ ಶೆಟ್ಟಿ ಮತ್ತು ಕೆಂಜ ಶಂಕರ ಪೂಜಾರಿ ಮೊದಲಾದವರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ತಜ್ಞರು ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ರಾಮಕೃಷ್ಣ ಬಂಟಕಲ್ಲು ವಿವರಿಸಿದ್ದಾರೆ.

loading...

No comments