Breaking News

ಮಂಗಳೂರು ಸಿಪಿಎಂ ಕಚೇರಿಗೆ ಬೆಂಕಿ: ಮೂವರ ಸೆರೆ


ಮಂಗಳೂರು : ತೊಕ್ಕೊಟ್ಟಿನ ಒಳಪೇಟೆಯಲ್ಲಿರುವ ಸಿಪಿಎಂ ಉಳ್ಳಾಲ ವಲಯ ಕಚೇರಿಗೆ ಫೆ 24ರಂದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಇಲ್ಲಿನ ವಾಸುಕಿನಗರದ  ದೀಕ್ಷಿತ್ (೨೮), ಭಟ್ನಗರದ ಡಿ.ಕೆ. ರಕ್ಷಿತ್ (೨೩), ತೊಕ್ಕೊಟ್ಟಿನ ಬೆನ್ನಿ.ಆರ್ (೨೨) ಎಂದು ಹೆಸರಿಸಲಾಗಿದೆ. ದೀಕ್ಷಿತ್ ಮತ್ತು ರಕ್ಷಿತ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಹಲವು ಪ್ರಕರಣಗಳಿವೆ ಎಂದು ಹೇಳಲಾಗಿದೆ. ಹಿಂದೆ ಚೆಂಬುಗುಡ್ಡೆ ಸಮೀಪ  ಲ್ಯಾನ್ಸಿ ಎಂಬಾತನ ಕೊಲೆಯತ್ನ ಪ್ರಕರಣದಲ್ಲಿ ಇಬ್ಬರು ಭಾಗಿಯಾಗಿದ್ದರು. ಪಿಣರಾಯಿ ವಿಜಯನ್ ಭೇಟಿ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಸಿಪಿಎಂ ಕಚೇರಿಯಲ್ಲಿ ಸೌಹಾರ್ದ ರ‍್ಯಾಲಿ ಪ್ರಚಾರಾರ್ಥ ಬ್ಯಾನರ್ ಬಂಟಿಂಗ್ಸ್‌ಗಳನ್ನು ಇಡಲಾಗಿತ್ತು. ಏಳು ಮಂದಿಯ  ತಂಡ ತೊಕ್ಕೊಟ್ಟು ಸಿಪಿಎಂ ಕಚೇರಿಗೆ ಬೆಂಕಿ ಹಾಕಿದ್ದರು.  ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರ ಬಂಧನವಾಗಿದೆ.

loading...

No comments