Breaking News

ಕಂಬಳ ಪರ ತಿದ್ದುಪಡಿ ವಿಧೇಯಕ ಮಂಡನೆ



ಬೆಂಗಳೂರು: ಕಂಬಳ ಸ್ಪರ್ಧೆಗೆ ಅವಕಾಶ ಕಲ್ಪಿಸಲು ಇಂದು ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದ್ದು .ಕೇಂದ್ರದ ಪ್ರಾಣಿ ಹಿಂಸೆ ತಡೆ ಕಾಯ್ದೆಯಲ್ಲಿ ಕಂಬಳ ಮತ್ತು ಎತ್ತಿನ ಗಾಡಿ ಓಟಕ್ಕೆ ಕರ್ನಾಟಕದಲ್ಲಿ ವಿನಾಯತಿ ನೀಡಿ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆಯ ತಿದ್ದುಪಡಿ ವಿಧೇಯಕ 2017ನ್ನು ಸಚಿವ ಎ. ಮಂಜು ಮಂಡಿಸಿದ್ದಾರೆ  . ಕಂಬಳದ ಜೊತೆಗೆ ಎತ್ತಿನ ಗಾಡಿ ಓಟಕ್ಕೂ ಈ ತಿದ್ದುಪಡಿ ವಿಧೇಯಕ ಅನುವು ಮಾಡಿಕೊಡಲಿದೆ.


loading...

No comments