Breaking News

ದಿನೇಶ್ ಗುಂಡೂರಾವ್ ಮಾನಸಿಕ ಅಸ್ವಸ್ಥರಾಗಿದ್ದಾರೆ – ಪ್ರತಾಪ್ ಸಿಂಹ



ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ವಿರುದ್ದ ದಿನೇಶ್ ಗುಂಡೂರಾವ್ ಮಾಡಿರುವ ವಾಗ್ದಾಳಿ ಅವರು ಮಾನಸಿಕ ಸ್ಥಿಮಿತದಲ್ಲಿದ್ದರೋ? ಅನ್ನೋ ಅನುಮಾನ ನನಗೆ ಇದೆ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಅವರು ಇಂದು ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿ ಈ ರೀತಿ ಮಾತನಾಡುವುದು ಸರಿಯೇ. ದಿನೇಶ್ ಗುಂಡೂರಾವ್ ಅವರಿಗೆ ಅವರ ತಂದೆ ಕಲಿಸಿದ ಸಭ್ಯತೆ ಇದೇಯೇ? ಅವರ ಮನೆಯಲ್ಲಿ ಇದೆ ಸಂಸ್ಕೃತಿಯಿಂದ ಮಾತನಾಡುತ್ತಾರಾ? ನಾವು ಸಹ ಅವರಂತೆ ಕೆಳಮಟ್ಟಕ್ಕೆ ಇಳಿದು ಪ್ರಶ್ನೆ ಮಾಡಬಹುದು. ನಮಗೆ ಅವರಂತ ಸಂಸ್ಕೃತಿಯೂ ಇಲ್ಲ ಎಂದು ವ್ಯಂಗ್ಯವಾಡಿದರುಯ
ಯಡ್ಯೂರಪ್ಪ ಅವರ ಅವಧಿಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಆದ್ರೆ ಗುಂಡೂರಾವ್ ಅವಧಿಯಲ್ಲಿ ರೌಡಿಗಳನ್ನ ಹುಟ್ಟುಹಾಕಿದ ಸಾಧನೆಯಾಗಿದೆ. ಈ ರೀತಿ ಮಾತನಾಡುವುದು ಅವರ ಕುಟುಂಬದಿಂದಲೇ ಬಂದಿದೆ ಎಂಬ ಅನುಮಾನ ಇದೆ. ಉಗಾಂಡದ ಸರ್ವಾಧಿಕಾರದ ಬಗ್ಗೆ ಮಾತನಾಡುತ್ತಾರೆ. ಆದ್ರೆ ಸರ್ವಾಧಿಕಾರ ಅಂದ್ರೆ ಮೊದಲ ಸಾಲಿನಲ್ಲಿ ನಿಲ್ಲೋದು ಕಾಂಗ್ರೆಸ್ಸಿಗರು ಅನ್ನೋದು ನೆನಪಿರಲಿ. ನೀವು ಕಚೇರಿಯಲ್ಲಿ ಹಾಕಿಕೊಂಡಿರುವ ಇಂದಿರಾಗಾಂಧಿ ಫೋಟೋ ಹಿನ್ನೆಲೆ ನೆನಪಿಸಿಕೊಳ್ಳಿ. ಅವರು ಸಹ ಅಪರಾಧಿ ಅಂತ ಆದೇಶವಾಗಿ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದ್ದರು. ದಿನೇಶ್ ಗುಂಡೂರಾವ್ ರವರೇ ನಿಮಗೆ ನಾಲಿಗೆ ಮೇಲೆ ಹಿಡಿತವಿರಲಿ ಎಂದು ವಾಗ್ದಾಳಿ ಮಾಡಿದರು.

loading...

No comments