Breaking News

ಗುಜರಾತ್ ಕತ್ತೆಗಳ ಪರ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಅಮಿತಾಬ್ ಬಚ್ಚನ್'ರಿಗೆ ಸಲಹೆ ನೀಡಿದ ಅಖಿಲೇಶ್ ಯಾದವ್.

ಉತ್ತರಪ್ರದೇಶ : ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಇದೇ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಅಮಿತಾಬ್ ಬಚ್ಚನ್'ರಲ್ಲಿ ಗುಜರಾತ್ ನ ಕತ್ತೆಗಳ ಪರ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಮನವಿಯನ್ನೂ ಮಾಡಿದರು.
ಅಮಿತಾಬ್ ಬಚ್ಚನ್ ಗುಜರಾತಿನ ಕತ್ತೆಗಳ ಪರ ಜಾಹೀರಾತುಗಲ್ಲಿ ಪ್ರಚಾರ ಮಾಡುತ್ತಿದ್ದಾರೆ ಅದನ್ನು  ನಿಲ್ಲಿಸಲಿ ಎಂದರು. ಇಷ್ಟೇ ಅಲ್ಲದೆ ಪ್ರಧಾನ ಮಂತ್ರಿ ಮೋದಿ ಪ್ರತಿ ತಿಂಗಳು ರೇಡಿಯೋ ಮುಖೇನ ನಡೆಸಿಕೊಡುವ ಮನ್'ಕೀ ಬಾತ್ ಕಾರ್ಯಕ್ರಮದ ಬಗ್ಗೆ ಗೇಲಿ ಮಾಡಿದ ಅಖಿಲೇಶ್ ಯಾದವ್ "ಪ್ರಧಾನಿ ಮೋದಿ ಮಾತನಾಡುವುದನ್ನು ಕಡಿಮೆ ಮಾಡಿ ಕೆಲಸ ಮಾಡಲಿ" ಎಂದು ಸಲಹೆ ನೀಡಿದರು.
ಗುಜರಾತ್ ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿರುವ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಜಾಹಿರಾತುಗಳಲ್ಲಿ ಅಳಿವಿನಂಚಿನಲ್ಲಿರುವ ಕಾಡುಕತ್ತೆ ಪ್ರಭೇದದ ಬಗ್ಗೆ ವಿವರಿಸುವ ದೃಶ್ಯಗಳು ಇವೆ. ಈ ಕಾಡು ಕತ್ತೆಗಳು ಗುಜರಾತಿನ ಕಚ್ ನಲ್ಲಿ ಕಾಣಸಿಗುತ್ತವೆ.
loading...

No comments