Breaking News

ಕೇರಳ ಸಿಎಂ ಪಿಣರಾಯಿ ವಿಜಯನ್‌ ಭದ್ರತೆ ಹೆಚ್ಚಳ



ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ತಲೆ ಕಡಿದವರಿಗೆ ಒಂದು ಕೋಟಿ ರೂ. ಬಹುಮಾನ ನೀಡುವುದಾಗಿ ಆರೆಸ್ಸೆಸ್‌ ಪದಾಧಿಕಾರಿಯೊಬ್ಬರು ಘೋಷಿಸಿದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಿರುವ ಕೇರಳ ಸರಕಾರ ಅವರ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ರಾಜ್ಯ ಭದ್ರತಾ ಪರಿಶೀಲನಾ ಸಮಿತಿ ಶನಿವಾರ ಸಭೆ ಸೇರಿ, ಬೆದರಿಯನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿತಲ್ಲದೆ, ಸಿಎಂ ಭದ್ರತಾ ತಂಡಕ್ಕೆ ನಾಲ್ಕು ಹೆಚ್ಚುವರಿ ಕಮಾಂಡೋಗಳನ್ನು ಸೇರಿಸಲು ತೀರ್ಮಾನಿಸಿತು. ಪ್ರಸಕ್ತ ಮುಖ್ಯಮಂತ್ರಿಗೆ ಆರು ಪೊಲೀಸ್‌ ಸಿಬ್ಬಂದಿಗಳ ಕಾವಲಿದೆ. 
loading...

No comments