Breaking News

ಯಡ್ಡಿ ಮಾಡಿದ ಪಾಪದ ಕೆಲಸಗಳು ಇನ್ನೊಂದು ಜನ್ಮ ತಾಳಿದರೂ ಕಳೆಯಲು ಸಾಧ್ಯವಿಲ್ಲ : ಸಿಎಂ ವಾಗ್ದಾಳಿ


ಮೈಸೂರು:ಯಡಿಯೂರಪ್ಪ ಧರ್ಮಾಧಿಕಾರಿಯೇ? ಅವರು ಮಾ‌ಡಿದ ಪಾಪದ ಕೆಲಸಗಳು ಇನ್ನೊಂದು ಜನ್ಮ ತಾಳಿದರೂ ಕಳೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಧರ್ಮದ ಆಧಾರದಲ್ಲಿ ಪ್ರಚಾರ ನಡೆಸಿ ಗೆಲುವು ಸಾಧಿಸಿದೆ ಎಂಬ ಬಿಎಸ್ ವೈ ಹೇಳಿಕೆಗೆ ತಿರುಗೇಟು ನೀಡಿದ ಅವರು ಯಡಿಯೂರಪ್ಪ ಧರ್ಮಾಧಿಕಾರಿಯೇ? ಆವರಷ್ಟು ಭ್ರಷ್ಟ ಭೂಲೋಕದಲ್ಲಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಬಜೆಟ್ ಮಂಡಿಸಬಹುದು. ಆದರೇ ಕರ್ನಾಟಕದಲ್ಲಿ ಉಪಚುನಾವಣೆ ಇರುವಾಗ ನಾವು ಬಜೆಟ್ ಮಂಡಿಸಬಾರದೇ? ಈ ಬಗ್ಗೆ ಬಿಜೆಪಿ ಅವರು ತಕರಾರು ತೆಗೆಯುತ್ತಿರುವುದು ವಿಷಾಧನೀಯ. ಬಿಜೆಪಿ ನಾಯಕರಿಗೆ ಕಾಮನ್ಸೆನ್ಸ್ ಇಲ್ಲವೇ ಎಂದು ಗುಡುಗಿದರು.
ನಂಜನಗೂಡು ಹಾಗೂ ಗುಂಡ್ಲುಪೇಟೆ ಜನತೆಗೆ ನಮ್ಮ ಸರ್ಕಾರದ ಕಾರ್ಯ ವೈಖರಿ ಹಾಗೂ ಜನೋಪಯೋಗಿ ಕಾರ್ಯಗಳ ಬಗ್ಗೆ ಅರಿವಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇರುವುದರಿಂದಲೇ ಸಾಲದ ಮೇಲಿನ ಬಡ್ಡಿಯನ್ನು ಮನ್ನ ಮಾಡಲಾಗಿದ್ದು, ಬರ ನಿರ್ವಹಣೆಗೆ ಕೋಟ್ಯಾಂತರ ರೂ ನೀಡಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಬಿಜೆಪಿ ಅವರಿಂದ ಯಾವುದೇ ಪಾಠ ಕಲಿಯುವ ಅಗತ್ಯವಿಲ್ಲ ಎಂದು ದೂರಿದರು.

loading...

No comments