ದೇವಸ್ಥಾನದ ಡಬ್ಬಿ ಕಳವುಗೈದ ಚೋರರ ಬಂಧನ
ಮಂಜೇಶ್ವರ : ದೇವಸ್ಥಾನಗಳ ಕಾಣಿಕೆ ಡಬ್ಬಿಗಳಿಂದ ಹಣ ದೋಚಿದ ಬಳಿಕ ಇನ್ನೊಂದು ಕ್ಷೇತ್ರದ ಕಾಣಿಕೆ ಡಬ್ಬಿಯನ್ನು ಮುರಿಯಲೆತ್ನಿಸಿದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಆಲಪ್ಪುಳ ಕಾಯಂಕುಳಂ ಪೆರಿಂಙಲಮಕ್ ನಿವಾಸಿ ಹಾಗೂ ಪ್ರಸ್ತುತ ನೆಲ್ಲಿಕಟ್ಟೆಯಲ್ಲಿರುವ ರಹೀಂ ಪಾಷಾ(31), ಚೆಂಗಳ ಮುಟ್ಟತ್ತೋಡಿಯ ಮನೆಯೊಂದರಲ್ಲಿ ವಾಸಿಸುತ್ತಿರುವ ಕೆ ಎಂ ರಜಾಕ್ (30) ಮತ್ತು ಮುಳಿಯಾರು ಚೂರಿಮೂಲೆಯ ಉಮ್ಮರ್ ಫಾರೂಕ(33)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದರು .
ಕಾಣಿಕೆ ಡಬ್ಬಿಯಿಂದ ಕಳವು ಮಾಡಿದ 4353 ರೂ ಮತ್ತು ಕಾಣಿಕೆ ಡಬ್ಬಿಗಳನ್ನು ಮುರಿಯಲು ಬಳಸಿದ ಪಿಕ್ಕಾಸ್ ಮತ್ತು ಅವರು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುಗು ಸುಬ್ರಾಯ ದೇವಸ್ಥಾನದ ಕಾಣಿಕೆ ಡಬ್ಬಿ, ಪೆರ್ಮುದೆ ಬಳಿಯ ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾಣಿಕೆ ಡಬ್ಬಿ ಮತ್ತು ಚೇವಾರು ಶ್ರೀ ವಿಷ್ಣುಮೂರ್ತಿ ಕೇತ್ರದ ಕಾಣಿಕೆ ಡಬ್ಬಿಯನ್ನು ಮುರಿದು ಹಣ ದೋಚಿದ್ದಾರೆ.
loading...
No comments