Breaking News

ಬುರ್ಖಾ ತೊಡಿಸಿ ​ಬಾಲಕಿಯರನ್ನು ಪುಸಲಾಯಿಸಿದ ಯುವಕನಿಗೆ ಬಿತ್ತು ಧರ್ಮದೇಟು

ಶಿವಮೊಗ್ಗ : ಶಾಲಾ ಬಾಲಕಿಯರನ್ನು ಪುಸಲಾಯಿಸಿ ಬುರ್ಕಾ ತೊಡಿಸಿ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ್ದಾರೆ.ದೇವಕಾತಿಕೊಪ್ಪದ ಹುಚ್ಚರಾಯ (31) ಬಂಧಿತ ಆರೋಪಿ.

ತನ್ನದೆ ಗ್ರಾಮದ ಪರಿಚಯಸ್ಥ ಶಾಲಾ ಬಾಲಕಿಯರನ್ನು ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಪಿಕ್‌ನಿಕ್‌ ಕರೆದುಕೊಂಡು ಹೋಗುವುದಾಗಿ ಹೇಳಿ ಒಪ್ಪಿಸಿದ್ದ. ಬುಧವಾರ ಬೆಳಗ್ಗೆ ಬಸ್ ನಲ್ಲಿ ಶಾಲೆಗೆ ಹೋಗಬೇಕಿದ್ದ ಬಾಲಕಿಯರನ್ನು ಉದ್ದೇಶಪೂರ್ವಕವಾಗಿ ತಡವಾಗಿ ಬರಲು ಹೇಳಿದ್ದ. ನಂತರ ಇಬ್ಬರನ್ನೂ ತನ್ನ ಬೈಕಿನಲ್ಲಿ ಕೂರಿಸಿ ಶಿವಮೊಗ್ಗ ಕಡೆ ಹೊರಟಿದ್ದ.

ದಾರಿ ಮಧ್ಯದಲ್ಲಿ ಮೊದಲೇ ತಂದಿದ್ದ ಬುರ್ಕಾವನ್ನು ಒಬ್ಬ ಬಾಲಕಿಗೆ ತೊಡಿಸಿ ಕರೆದೊಯ್ಯುತ್ತಿದ್ದ. ಆದರೆ, ದಾರಿ ಮಧ್ಯದಲ್ಲಿ ಕೆಲ ಮುಸ್ಲಿಂ ಯುವಕರು ಇವರ ಚಲನವಲನದ ಬಗ್ಗೆ ಅನುಮಾನಗೊಂಡು ಬೆನ್ನಟ್ಟಿ ಬೈಕ್‌ ತಡೆದು ಬಾಲಕಿಯರ ಬುರ್ಕಾ ತೆಗೆಸಿ ನೋಡಿದಾಗ ನಿಜ ಸಂಗತಿ ಬಯಲಿಗೆ ಬಂತು.

ಹುಚ್ಚರಾಯನಿಗೆ ಧರ್ಮದೇಟು ಕೊಟ್ಟು , ಪೊಲೀಸರ ವಶಕ್ಕೆ ಒಪ್ಪಿಸಿದರು. ಪೋಷಕರ ಒಪ್ಪಿಗೆ ಇಲ್ಲದೆ ಬಾಲಕಿಯರನ್ನು ಕದ್ದುಮುಚ್ಚಿ ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಆಪಾದನೆ ಮೇಲೆ ತುಂಗಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
loading...

No comments