Breaking News

ದನ ಕಳ್ಳರ ಅಟ್ಟಾಡಿಸಿ ಬಗ್ಗು ಬಡಿದ ಯುವಕರು




ಕೊಪ್ಪ :  ತಾಲೂಕಿನ ಅದ್ದಡ ಗ್ರಾಮದಲ್ಲಿ ದನಕಳ್ಳರನ್ನು ಯುವಕರ ಗುಂಪು ಒಂದು ಸಿನಿಮೀಯ ರೀತಿ ಬೆನ್ನಟ್ಟಿ ಎರಡು ಹಸುಗಳ ರಕ್ಷಣೆ ಮಾಡಿದ ಘಟನೆ ವರದಿ ಆಗಿದೆ .





ಘಟನೆ ವಿವರ 
ಕೊಪ್ಪ ತಾಲೂಕಿನ ಅದ್ದಡ ಗ್ರಾಮದಲ್ಲಿ ಇಂದು ಮುಂಜಾನೆ ಭುಜಂಗ ಶೆಟ್ಟಿ ಯವರ ಕೊಟ್ಟಿಗೆಯಲ್ಲಿದ್ದ ರಾಸುಗಳನ್ನು ಕದ್ದು ಎರಡು ರಿಟ್ಜ್ ಕಾರಿನಲ್ಲಿ ತುಂಬಿಸಿ ಹೋಗಲೆತ್ನಿಸಿದಾಗ ಸ್ಥಳೀಯ ಯುವಕರಾದ ಸತೀಶ್ಚಂದ್ರ ಶೆಟ್ಟಿ, ಭರತ್, ಶರತ್ ಸಿಗದಾಳು ಶರತ್ ಕಾರಂಗಿ, ನತ್ತು ಇನ್ನಿತರರು ಸಿನಿಮೀಯ ರೀತಿಯಲ್ಲಿ ಗೋ ಕಳ್ಳರನ್ನು ಬೆನ್ನಟ್ಟಿ ಸಿಗದಾಳು ದೇವಸ್ಥಾನದ ಬಳಿ ಕಾರನ್ನು ಅಡ್ಡಗಟ್ಟಿ ಸಂಧರ್ಭದಲ್ಲಿ ಗೋ ಕಳ್ಳರು ಒಂದು ಕಾರನ್ನು ಬಿಟ್ಟು ಇನ್ನೊಂದು ಕಾರಿನಲ್ಲಿ ಕತ್ತಲೆಯಲ್ಲಿ ಪರಾರಿಯಾದರು ಎಂದು ಹೇಳಲಾಗಿದೆ .ಕಾರಿಗೆ ನಕಲಿ ನಂಬರ್ ಪ್ಲೇಟ್ ಹಾಕಿ  ಅಸಲಿ ನಂಬರ್ ಪ್ಲೇಟ್ ಕಾರಿನ ಒಳಗೆ ಪತ್ತೆಯಾಗಿದ್ದು ಕಾರು ಮಂಗಳೂರಿನ ನೊಂದಣಿ ಹೊಂದಿದ್ದು ಬಂಟ್ವಾಳದ ಜೊಹರ ಎಂಬ ವ್ಯಕ್ತಿಯ ಹೆಸರಿನಲ್ಲಿದೆ. ಘಟನೆ ಬಗ್ಗೆ ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ವಶಪಡಿಸಿಕೊಂಡ ಕಾರಿನಲ್ಲಿ ಎರಡು ದನಗಳು ಬಹಳ ಅವಮಾನವೀಯವಾಗಿ ಕಟ್ಟಿ ಹಾಕಲು ಆಗಿತ್ತು ಅದಲ್ಲದೆ ಕಾರಿನಲ್ಲಿದ್ದ  50 ಕೇಜಿಯಷ್ಟು ಶ್ರೀಗಂದದ ತುಂಡುಗಳು ,ಮಾರಕಾಸ್ತ್ರಗಳನ್ನೂ ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ .


loading...

No comments