Breaking News

ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತ ಹಿಂದೆ ಸಂತೋಷ್ ಕೈವಾಡ : ಬಿಎಸ್‍ವೈ



ಬೆಂಗಳೂರು :ನಗರದ ಅರಮನೆ ಮೈದಾನದಲ್ಲಿಂದು “ಸಂಘಟನೆ ಉಳಿಸಿ” ಸಭೆ ನಡೆಸಿದ ಬಿಜೆಪಿ ಅತೃಪ್ತರರಿಗೆ  ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ .ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ
ಮಾತ ನಾಡಿದ ಅವರು ಕೆ.ಎಸ್. ಈಶ್ವರಪ್ಪಗೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ಬೇಕೋ ಇಲ್ಲವೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೇಕೋ ಎಂಬುದನ್ನು ಅವರೇ ಆಯ್ಕೆ ಮಾಡಿಕೊಳ್ಳಬೇಕು. ಅನಗತ್ಯವಾಗಿ ಪಕ್ಷದಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದ್ದಾರೆ .

ಪಕ್ಷದಲ್ಲಿ ಭಿನ್ನಮತ ಇದ್ದಾರೆ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ ಪರಿಹರಿಸಿಕೊಳ್ಳಬಹುದಿತ್ತು ಅದನ್ನು ಬಿಟ್ಟು ಪರ್ಯಾಯ ಸಭೆ ನಡೆಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಈ ಎಲ್ಲಾ ಪಕ್ಷ ವಿರೋಧಿ ಚಟುವಟಿಕೆ ಹಿಂದೆ ರಾಷ್ಟ್ರೀಯ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಕೈವಾಡವಿದೆ ಎಂದು ಬಿಎಸ್‍ವೈ ಆರೋಪಿಸಿದರು. ಸಂತೋಷ್ ಪ್ರೇರಣೆ ಇಲ್ಲದೆ ಈಶ್ವರಪ್ಪ ಇಷ್ಟು ಮುಂದೆ ಹೋಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ರಾಷ್ಟ್ರೀಯ ಅಧ್ಯಕ್ಷರು ಗಮನಿಸುತ್ತಿದ್ದಾರೆ. ಇಂದಿನ ಸಭೆಗೆ ಭಾಗವಹಿಸಿರುವವರು ಬಹುತೇಕ ಎಲ್ಲರೂ ಸಂತೋಷ್ ಶಿಷ್ಯಂದಿರು ಹಾಗೂ ಬಲಗೈ ಭಂಟರು. ನಾನು ಎಲ್ಲವನ್ನೂ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
loading...

No comments