Breaking News

ರಾಮ ಮಂದಿರ ನಿರ್ಮಾಣಕ್ಕೆ ಸಿಮೆಂಟ್ ದೇಣಿಗೆ ನೀಡಿದ ಮುಸ್ಲಿಂ ಯುವಕ



ಕೊಪ್ಪಳ: ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಮುಸ್ಲಿಂ ಯುವಕರೊಬ್ಬರು ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡುವುದಕ್ಕೆ ಮುಂದಾಗಿದ್ದಾರೆ.


ಯುವಕ ಶಂಸುದ್ದೀನ್ ನದಾಫ್ ಎಂಬುವರೇ ಸಿಮೆಂಟ್ ನೀಡಲು ಮುಂದಾಗಿದ್ದು, ಈ ಕುರಿತು ಬುಧವಾರ ಮಾತನಾಡಿ, ಭಾವೈಕ್ಯತೆ ಮೆರೆಯುವ ಕಾರಣಕ್ಕಾಗಿ ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಚೀಲ ಸಿಮೆಂಟ್ ನೀಡಲಾಗುವುದು. ಏ. 27 ರಂದು ಬೆಳಗ್ಗೆ ತಿರುಪತಿ ಎಕ್ಸ್‍ಪ್ರೆಸ್ ರೈಲಿಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿಂದ ಲಖನೌಗೆ ತೆರಳಲಾಗುವುದು ಎಂದು ತಿಳಿಸಿದ್ದಾರೆ.

ಏ. 29 ರಂದು ಅಯೋಧ್ಯೆ ತಲುಪಲಾಗುವುದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ಸಿಮೆಂಟ್ ಚೀಲದ ಮೊತ್ತದ ಹಣ ಪಾವತಿಸಿ ರಸೀದಿ ಪಡೆಯಲಾಗುವುದು. ಸಿಮೆಂಟ್ ನೀಡುವುದಕ್ಕೆ ಯಾರ ಒತ್ತಡವೂ ಇಲ್ಲ. ಸ್ವಯಂ ಪ್ರೇರಣೆಯಿಂದ ನೀಡಲಾಗುತ್ತಿದೆ. ತಮ್ಮ ಈ ಸೇವೆಗೆ ಕುಟುಂಬದ ಸಹಕಾರವೂ ಇದೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸಿದರು ಎಂದು ನದಾಫ್‌ ತಿಳಿಸಿದ್ದಾರೆ.
toi
loading...

No comments