ಕಲ್ಲು ತೂರಾಟಗಾರ ಬಿಎಸ್ಸೆಫ್ ಗುಂಡಿಗೆ ಬಲಿ
ಸತ್ತ ಯುವಕನ ಮೃತ ದೇಹದ ಮೇಲೆ ಪಾಕಿಸ್ತಾನ ಭಾವುಟ
ಶ್ರೀನಗರ: ಕಾಶ್ಮೀರದ ರಾಜಧಾನಿ ಶ್ರೀನಗದಲ್ಲಿ ಯೋಧರ ಮೇಲೆ ಕಲ್ಲು ತೂರಾಟ ನಡೆಸುವ ದುಷ್ಟ ಕೃತ್ಯ ಮುಂದುವರಿದಿದ್ದು, ಶನಿವಾರ ಕಲ್ಲು ತೂರಿದ ಯುವಕರ ಗುಂಪಿನ ಮೇಲೆ ಬಿಎಸ್ಎಫ್ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಚಂದೂಸಾ ನಿವಾಸಿ ಸಜ್ಜದ್ ಹುಸೇನ್ ಶೇಖ್ ಎಂಬಾತ ಸಾವನ್ನಪ್ಪಿದವನಾಗಿದ್ದು, ಘಟನೆಯ ಬಳಿಕ ನಗರದಲ್ಲಿ ಸಂಘರ್ಷ ಸ್ಥಿತಿ ನಿರ್ಮಾಣಗೊಂಡಿದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.ಸತ್ತ ಯುವಕನ ಮೃತ ದೇಹದ ಮೇಲೆ ಪಾಕಿಸ್ತಾನ ಭಾವುಟ ಹಾಕಿ ಜಿಹಾದಿಗಳು ಕೌರ್ಯ ಮೆರೆದಿದ್ದಾರೆ ಎಂದು ತಿಳಿದು ಬಂದಿದೆ .
loading...
No comments