Breaking News

ತಲಪಾಡಿ ಟೋಲ್ ಸಿಬ್ಬಂದಿಯ ಗೂಂಡಾಗಿರಿ



ಮಂಗಳೂರು :  ತಲಪಾಡಿಯ ಟೋಲ್‌ಗೇಟ್ ಬಳಿ ವೃದ್ದರೊಬ್ಬರಿಗೆ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಿದ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ ನಡೆದಿದೆ.

ಕಂದಕ ನಿವಾಸಿ ಹಾಜಿ ರೆಸಿಡೆನ್ಸಿಯ ಮಹಮ್ಮದ್ ಸಾಲಿ ಎಂಬವರ ಪುತ್ರ  ಅಬ್ದುಲ್ ಹಮೀದ್ ಸರಾಫತ್ (೨೫)  ಹಲ್ಲೆಗೊಳಗಾದವರು.  ಕೆಲಸದ ನಿಮಿತ್ತ ಮಂಗಳೂರಿನಿಂದ ಕಾಸರಗೋಡಿಗೆ  ಕಾರಿನಲ್ಲಿ  ತೆರಳುವ ಸಂದರ್ಭ ಘಟನೆ ನಡೆದಿದ್ದು, ಸರಾಫತ್ ಅವರು ತನ್ನ ಕಾರ್‌ನಲ್ಲಿ ಅಪರಾಹ್ನ ೨.೩೦ರ ವೇಳೆ ತಲಪಾಡಿ ಟೋಲ್‌ಗೇಟ್ ತಲುಪುತ್ತಿದ್ದಂತೆ ಟೋಲ್ ಸಿಬ್ಬಂದಿ ವಾಹನ ಚಾಲಕ ವೃದ್ದರೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಸರಾಫತ್ ಟೋಲ್ ಸಿಬ್ಬಂದಿಯಲ್ಲಿ ಹಲ್ಲೆಯ ಕಾರಣ ವಿಚಾರಿಸಿ ಚಾಲಕರ ತಪ್ಪಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ಸರಿಯಲ್ಲ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಸಂದರ್ಭ ಟೋಲ್ ಗೇಟ್‌ನ ಸಿಬ್ಬಂದಿ ಏಕಾಏಕಿ ಹಲ್ಲೆ ವಿಚಾರವನ್ನು ಪ್ರಶ್ನಿಸಿದ ಸರಾಫತ್‌ರನ್ನು ಸುತ್ತುವರಿದು ಹಲ್ಲೆ ನಡೆಸಿ ತೆರಳಿದರು ಎನ್ನಲಾಗಿದೆ. ಗಾಯಗೊಂಡಿದ್ದ ಸರಾಫತ್‌ರನ್ನು ಸ್ಥಳೀಯರೊಬ್ಬರು ಉಳ್ಳಾಲದ ಸರೋಜ್ ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ. ಹಲ್ಲೆ ನಡೆಸಿದ ಎಲ್ಲರಲ್ಲೂ ಗುರುತಿನ ಚೀಟಿ ಬ್ಯಾಜ್ ಇದ್ದು, ಇದರಿಂದ ಟೋಲ್ ಗೇಟ್ ಸಿಬ್ಬಂದಿಯೇ ಹಲ್ಲೆ ನಡೆಸಿದ್ದಾರೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸರಾಫತ್ ದೂರು ದಾಖಲಿಸಿದ್ದಾರೆ.

loading...

No comments