Breaking News

ದಕ್ಷಿಣಕನ್ನಡಲ್ಲಿ ಭಾರೀ ಮಳೆ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಭರ್ಜರಿ ಮಳೆಯಾಗಿದೆ. ಮಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಸಂಜೆಯ ವೇಳೆಗೆ ಸುರಿದ ಮಳೆ ನಗರವಾಸಿಗಳನ್ನು ಹೈರಾಣಾಗಿಸಿದೆ.

ಭಾರೀ ಮಳೆಯ ಪರಿಣಾಮ ಡ್ರೈನೇಜ್ ತುಂಬಿ ನೀರು ರಸ್ತೆಯಲ್ಲಿ ಹರಿದಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ. ಹಲವಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಮಂಗಳೂರು ಮಾತ್ರವಲ್ಲದೆ ಜಿಲ್ಲೆಯಾದ್ಯಾಂತ ಸುರಿದ ಮಳೆ ನಗರವಾಸಿಗಳು ಸ್ವಲ್ಪ ತೊಂದರೆ ಪಟ್ಟರೆ, ಕೃಷಿಕರಿಗೆ ಮಳೆ ಸಂತಸವನ್ನು ತಂದಿದೆ.
-public tv

No comments