Breaking News

Rss ಕಾರ್ಯಕರ್ತ ಶರತ್ ಮಡಿವಾಳ ಇನ್ನಿಲ್ಲ

ಮಂಗಳೂರು (ಬಂಟ್ವಾಳ) : ಜುಲೈ 7 ಕಳೆದ ಮಂಗಳವಾರ ತಡ ರಾತ್ರಿ 9.00 ಗಂಟೆ ಸುಮಾರಿಗೆ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮೇಲೆ ದುಷ್ಕರ್ಮಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಲೆಗೆ ಹಾಗು ಕುತ್ತಿಗೆ ಭಾಗಕ್ಕೆ ತೀವ್ರವಾದ ಏಟು ಬಿದ್ದಿದ್ದು  ಕೂಡಲೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶರತ್ ಮಡಿವಾಳ್
ತಲೆಗೆ ತೀವ್ರವಾಗಿ ಪಟ್ಟು ಬಿದ್ದಿದ್ದ ಕಾರಣ ಅಧಿಕ ರಕ್ತಸ್ರಾವ ನಡೆದಿದ್ದು ಬೇಡಿಕೆ ಇರುವಷ್ಟು ರಕ್ತವನ್ನು ಪೂರೈಸಿದ್ದರು. ಸತತ ಪರಿಶ್ರಮ ನಡೆಸಿದರು ಶರತ್ ಬದುಕಿ ಬರಲಿಲ್ಲ ಎಂದು ವೈದ್ಯರು ವಿಷಾದ ವ್ಯಕ್ತಪಡಿಸಿದ್ದಾರೆ.

ಶರತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಂಟ್ವಾಳ ಹಿಂದು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಮುಂದಿನ 24 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸಿ, ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ, ಇದು ಪೋಲಿಸ್ ಇಲಾಖೆ ಗೆ ತಲೆ ನೋವಾಗಿ ಪರಿಣಮಿಸಿದೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಶರತ್:
ಶರತ್ ಮಡಿವಾಳ ಅವರು ಇನಿಲ್ಲ ಎಂದ ತಿಳಿದ ಕೂಡಲೇ ಅವರ ಕುಟುಂಬದ ಸದಸ್ಯರು ಶರತ್ ಅವರ ಅಂಗಾಂಗ ದಾನ ಮಾಡುವ ಮೂಲಕ ಹೃದಯ ವೈಶ್ಯಾಲ್ಯತೆ  ಮೆರೆದಿದ್ದಾರೆ ಎಂದು ತಿಳಿದು ಬಂದಿದೆ.

No comments