Breaking News

ದೇವಸ್ಥಾನದ ಡಬ್ಬಿಗೆ ಕನ್ನ ಹಾಕಿ ಸಿಕ್ಕಿ ಬಿದ್ದರು



ತಿಪಟೂರು : ದೇವಾಲಯವೊಂದರ ಹುಂಡಿ ಕಳವು ಮಾಡಲು ಬಂದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲ್ಲೂಕಿನ ಬಿದರೆಗುಡಿಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಮೂಲದ ನಿಖಿಲ್ (25) ಹಾಗ ಲಯನ್ (27) ಎಂಬುವರೇ ಸಿಕ್ಕಿ ಬಿದ್ದಿರುವ ಕಳ್ಳರು. ಮೂರು ಮಂದಿ ಕಳ್ಳರು ಬಿದರೆಗುಡಿ ಗ್ರಾಮದ ಬಿದರಾಂಬಿಕಾ ದೇವಸ್ಥಾನಕ್ಕೆ ಹುಂಡಿ ಕಳವು ಮಾಡಲೆಂದು ಕಳ್ಳತನಕ್ಕೆ ಯತ್ನಿಸಿದ್ದಾರೆ.

ದೇವಾಲಯದ ಕಡೆಯಿಂದ ಕೇಳಿ ಬಂದ ಶಬ್ದದಿಂದ ಎಚ್ಚರಗೊಂಡಿರು ಗ್ರಾಮಸ್ಥರು ತಕ್ಷಣ ದೇವಸ್ಥಾನಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಮೂವರು ಕಳ್ಳರ ಪೈಕಿ ನರಸಿಂಹಮೂರ್ತಿ ಎಂಬಾತ ಪರಾರಿಯಾಗಿದ್ದು, ಇವರಿಬ್ಬರು ಸಿಕ್ಕಿ ಬಿದಿದ್ದಾರೆ.ಇವರ ಬಳಿಯಿದ್ದ ಬ್ಯಾಗ್‌ನಲ್ಲಿ ಎಕ್ಸೆಲ್ ಬ್ಲೇಡ್ ಸೇರಿದಂತೆ ಹಲವು ಆಯುಧಗಳು ಪತ್ತೆಯಾಗಿವೆ ಎನ್ನಲಾಗಿದೆ.

ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿರುವ ಹೊನ್ನವಳ್ಳಿ ಪೊಲೀಸರು ಕಳ್ಳರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

No comments