Breaking News

ಕಾಂಗ್ರೆಸ್ ಗೆ ಬಿಗ್ ಶಾಕ್ ಹಿಂದು ವಿರೋಧಿ ನೀತಿಗೆ ಬೇಸತ್ತು ಪಕ್ಷ ತೊರೆದ ರಾಹುಲ್ ಆಪ್ತ


ನವದೆಹಲಿ: ರಾಷ್ಟ್ರಾದ್ಯಂತ ಬಿಜೆಪಿ ಅಲೆಯಲ್ಲಿ ಕೊಚ್ಚಿ ಹೋಗಿ ನೆಲೆ ಕಂಡುಕೊಳ್ಳಲು ಪರದಾಡುತ್ತಿರುವ ಕಾಂಗ್ರೆಸ್​ಗೆ ಈಗ ಮತ್ತೊಂದು ಶಾಕ್​ ಎದುರಾಗಿದೆ. ಕಾಂಗ್ರೆಸ್​ ಉಪಾಧ್ಯಕ್ಷ ರಾಹುಲ್​ ಗಾಂಧಿ ಅವರ ಆಪ್ತ ಮತ್ತು ಕಾಂಗ್ರೆಸ್​ ಪಕ್ಷದ ಚುನಾಣಾ ತಂತ್ರಗಾರ ಆಶಿಶ್​ ಕುಲಕರ್ಣಿ ರಾಜಿನಾಮೆ ನೀಡಿದ್ದಾರೆ.
ಕಾಂಗ್ರೆಸ್​ ಎಡಪಂಥೀಯ ಸಿದ್ದಾಂತಕ್ಕೆ ಮಣಿ ಹಾಕುತ್ತಿದೆ. ಜತೆಗೆ ಎಡಪಂಥೀಯ ಸಿದ್ದಾಂತ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿಗಳ ಕುರಿತು ಮೃದು ಧೋರಣೆ ತೋರುತ್ತಿದೆ. ಕಾಶ್ಮೀರ ಮತ್ತು ಜೆಎನ್​ಯು ವಿಷಯದಲ್ಲಿ ತನ್ನದೇ ಆದ ನಿಲುವನ್ನು ತಳೆಯುವಲ್ಲಿ ಕಾಂಗ್ರೆಸ್​ ಪಕ್ಷ ಸೋತಿದೆ ಎಂದು ಆಶಿಶ್​ ತಮ್ಮ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್​ನ ಎಡಪಂಥಿಯ ನಿಲುವೇ ಪಕ್ಷಕ್ಕೆ ಮಾರಕವಾಗ್ತಿದೆ. ಇದರಿಂದಾಗಿಯೇ ಕಾಂಗ್ರೆಸ್​ ಪಕ್ಷ ಮಹಾರಾಷ್ಟ್ರ, ಅಸ್ಸಾಂ, ಗೋವಾ, ಉತ್ತರಾಖಂಡ, ಅರುಣಾಚಲ ಪ್ರದೇಶದಲ್ಲಿ ಸೋಲನುಭವಿಸಿದೆ. ಕಾಂಗ್ರೆಸ್​ ಪಕ್ಷ ದೇಶದ ತಳಮಟ್ಟದ ಸಮಸ್ಯೆಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದೆ, ಜತೆಗೆ ಬದಲಾಗುತ್ತಿರುವ ಸಮಯದೊಂದಿಗೆ ಹೊಂದಿಕೊಳ್ಳುವಲ್ಲಿ ಸೋಲನುಭವಿಸಿದೆ.

ಕಾಂಗ್ರೆಸ್​ ಪಕ್ಷ ವಿರೋಧ ಪಕ್ಷದ ರೂಪದಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಕಳೆದುಹೋಗುತ್ತಿದ್ದು, ಹಣ ಬಲ ಇರುವವರಿಗೆ ಮಾತ್ರ ಪಕ್ಷದಲ್ಲಿ ಮನ್ನಣೆ ಸಿಗುತ್ತಿದೆ ಎಂದು ಆಶಿಶ್​ ಕಾಂಗ್ರೆಸ್​ ಪಕ್ಷದ ಹುಳುಕುಗಳ ಕುರಿತು ತಮ್ಮ ರಾಜಿನಾಮೆ ಪತ್ರದಲ್ಲಿ ಬೆಳಕು ಚೆಲ್ಲಿದ್ದಾರೆ.

(ವಿಜಯವಾಣಿ)

No comments