Breaking News

ಅಕ್ರಮವಾಗಿ ನಡೆಸುತ್ತಿರುವ ಮದ್ರಾಸಗಳನ್ನು ಮುಚ್ಚಿ ಮದ್ರಾಸಗಳ ಪಾರದರ್ಶಕತೆಗೆ ಯೋಗಿ ಖಡಕ್ ಆದೇಶ

ನವದೆಹಲಿ: ಉತ್ತರಪ್ರದೇಶದ ಯೋಗಿ ಸರ್ಕಾರ ರಾಜ್ಯದಲ್ಲಿ ಇರುವ ಮದಾರ್ಸಗಳಿಗೆ ಹೊಸ ಕ್ರಮಗಳನ್ನು ಪಾಲಿಸುವಂತೆ ಸುತ್ತೋಲೆ ಹೊರಡಿಸಿದೆ . ಆಗಸ್ಟ್ 15 ರಂದು, ರಾಜ್ಯ ಸರ್ಕಾರವು ತ್ರಿವರ್ಣ ಧ್ವಜವನ್ನು ಹಾರಿಸುವುದಕ್ಕೆ ಎಲ್ಲಾ ಮದ್ರಾಸಾಗಳಿಗೆ ಆದೇಶಿಸಿತ್ತು ಹಾಗೂ ಇಡೀ ಸ್ವಾತಂತ್ರ್ಯ ದಿನದ ಕಾರ್ಯಕ್ರಮದ ವೀಡಿಯೋಗ್ರಫಿ ಮಾಡಿ ಸರಕಾರಕ್ಕೆ ನೀಡುವಂತೆ  ಆದೇಶಿಸಿತು. ಸರಕಾರದ ಈ ಕ್ರಮವನ್ನು ಮುಸ್ಲಿಂ ಸಂಘಟನೆಗಳು ವಿರೋಧಿಸಿದ್ದರು ಈ ಕ್ರಮವನ್ನು ನೀಡುವ ಮೂಲಕ ಸರ್ಕಾರವು ನಮ್ಮನ್ನು ಅನುಮಾನಿಸುತ್ತಿದೆ ಎಂದು ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. ಇದರ ನಂತರ, ಗುರುವಾರ ಮದ್ರಾಸಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಯೋಗಿ ಸರ್ಕಾರದ ಪರವಾಗಿ ಹೊಸ ಆದೇಶವನ್ನು ಇದೀಗ ನೀಡಲಾಗಿದೆ.

ಹೊಸ ಆದೇಶದಡಿಯಲ್ಲಿ, ಉತ್ತರಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮದ್ರಾಸಗಳನ್ನು ಆನ್ಲೈನ್ನಲ್ಲಿ ನೋಂದಣಿ ಮಾಡಲಾಗುವುದು. ಮದ್ರಾಸದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಈ ಕಾನೂನನ್ನು ಯೋಗಿ ಸರ್ಕಾರ ಕೈಗೆ ತೆಗೆದುಕೊಂಡಿದ್ದಾರೆ. ಇದಕ್ಕಾಗಿ, ಶುಕ್ರವಾರ ಸರ್ಕಾರವು ಒಂದು ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ಪ್ರಾರಂಭವಾದ ನಂತರ, ಇದು ಮದರ್ಸ ಶಿಕ್ಷಣ ಮಂಡಳಿಗೆ ಸಂಪರ್ಕವಿರುವ ಎಲ್ಲ ಮದ್ರಾಸಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಈ ಪೋರ್ಟಲ್ ಪ್ರಾರಂಭವಾದ ನಂತರ, ಎಲ್ಲಾ ಮದ್ರಾಸಗಳನ್ನು ಆನ್ಲೈನ್ನಲ್ಲಿ ಮಾಡಲಾಗುವುದು, ನಂತರ ದೊಡ್ಡ ಮಟ್ಟದಲ್ಲಿ ನಡೆಯಬಹುದಾದ ಅವಘಡಗಳನ್ನು ತಡೆಯಲು ಸಹಾಯ ಮಾಡುತ್ತದೆ ಹಾಗೂ ಅಕ್ರಮವಾಗಿ ನಡೆಸುತ್ತಿರುವ ಮದ್ರಾಸಗಳು ಬೆಳಕಿಗೆ ಬರುತ್ತವೆ ಎಂದು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ  ಅನುದಾನಿತ ಮದ್ರಸಾಗಳನ್ನು ಈ ಪೋರ್ಟಲ್ನಲ್ಲಿ ನೋಂದಣಿ  ಮಾಡಲಾಗುವುದು. ಇದು ಮದ್ರಾಸಗಳ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಮದ್ರಾಸಗಳ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮಾಡುವಲ್ಲಿ ಸಹ ಸರ್ಕಾರವು ಸಹಾಯ ಮಾಡುತ್ತದೆ. ಪೋರ್ಟಲ್ ಪ್ರಾರಂಭವಾದ ನಂತರ, ಸಂಬಳದ ಪಾವತಿ ಸೇರಿದಂತೆ ಎಲ್ಲಾ ಸಮಸ್ಯೆಗಳು ಆನ್ಲೈನ್ನಲ್ಲಿ ವಿದ್ಯಾರ್ಥಿವೇತನವನ್ನು ಬಗೆಹರಿಸಲಾಗುತ್ತದೆ. ಇದುವರೆಗೆ  ಉತ್ತರ ಪ್ರದೇಶದಲ್ಲಿ  ಒಟ್ಟು 6725 ಗುರುತಿಸಲ್ಪಟ್ಟ ಮದ್ರಾಸಗಳು ಕಾರ್ಯಚರಿಸುತ್ತಿವೆ ಎಂದು ತಿಳಿದುಬಂದಿದೆ.

No comments